ಸಂದೇಶ
ಮಾಲಾಡಿ ಅಜಿತ್ ಕುಮಾರ್ ರೈ
30-03-2021
ಸನ್ಮಾನ್ಯ ದಂಬೆಕ್ಕಾನ ಸದಾಶಿವ ರೈಗಳು ಬಂಟ ಮದುವೆ ಹಾಗೂ ಬಂಟ ಗುರಿಕ್ಕಾರ ವಿಷಯದಲ್ಲಿ ಬರೆದ ಕೃತಿಯು ಸಮಾಜ ಬಾಂಧವರಿಗೆ ನಮ್ಮ ಸಂಪ್ರದಾಯದ ವಿಷಯದಲ್ಲಿ ದಾರಿದೀಪದಂತಿದೆ. ಇದು ಅನುಭವ ಹಾಗೂ ಅಧ್ಯಯನದಿಂದ ರಚಿಸಿದ ಉತ್ತಮ ಕೃತಿಯಾಗಿದೆ.
ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಅವುಗಳದೇ ಆದ ಕಟ್ಟುಪಾಡು ರೀತಿ ರಿವಾಜುಗಳಿವೆ. ಈ ಎಲ್ಲಾ ಕಾರ್ಯಕ್ರಮಗಳು ನಂಬಿಕೆ, ಸಂಪ್ರದಾಯ ಅನುಭವದಿಂದ ರೂಪುಗೊಂಡಿದ್ದು ಅವುಗಳಿಗೆ ಅದರದ್ದೇ ಆದ ಸೊಬಗು, ಮಹತ್ವ, ಶಕ್ತಿ ಇದೆ. ಆದರೆ ಇತ್ತೀಚೆಗೆ ನಮ್ಮ ಕೆಲವು ಸಮಾಜ ಬಾಂಧವರು ಮಾಹಿತಿ ಅಥವಾ ಮಾರ್ಗದರ್ಶನದ ಕೊರತೆಯಿಂದ ಈ ಉತ್ತಮ ಕ್ರಮಗಳನ್ನು ಮರೆತು ಬಿಟ್ಟಿದ್ದಾರೆ. ನಮ್ಮ ಉನ್ನತವಾದ ಈ ಆಚಾರ ವಿಚಾರ ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯ, ಪರಂಪರೆ ಉಳಿಯಬೇಕು. ಅದರ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳು ವಂತಾಗಬೇಕು ಎಂಬ ಸದುದ್ದೇಶದಿಂದ ಈ ಕೃತಿಯು ರೂಪ ಪಡೆದಿದೆ.
ಕೌಟುಂಬಿಕ ಬದುಕಿನಲ್ಲಿ ಗಂಡು ಹೆಣ್ಣಿನ ಕರ್ತವ್ಯ ಜವಾಬ್ದಾರಿ, ಹಕ್ಕುಗಳ ಬಗ್ಗೆ, ಸಾಮರಸ್ಯದ ಸಹಜೀವನ, ಸುಖ ಸಂತೋಷ ನೆಮ್ಮದಿಯ ಸುಖಿ ಸಂಸಾರವನ್ನು ನಡೆಸಲು ಬೇಕಾದ ಮಾರ್ಗದರ್ಶನ ಈ ಕೃತಿಯಲ್ಲಿದೆ.
ಮದುವೆಗಿಂತ ಮೊದಲು ಆಗಬೇಕಾದ, ಮದುವೆಯ ಸಂದರ್ಭದಲ್ಲಿ ಆಗಬೇಕಾದ, ಅನಂತರ ಆಗುವ ಎಲ್ಲಾ ಕ್ರಮಗಳ ಬಗ್ಗೆ ಉತ್ತಮವಾದ ಮಾಹಿತಿ ವಿವರಗಳನ್ನು ದಂಬೆಕ್ಕಾನ ಸದಾಶಿವ ರೈಗಳು ಸಮಾಜಕ್ಕೆ ಒದಗಿಸಿ ಕೊಟ್ಟಿದ್ದಾರೆ.
ಈ ಕೃತಿಯು ಬಂಟ ಸಮಾಜಕ್ಕೆ ಮಾರ್ಗದರ್ಶನ, ಮಾಹಿತಿ ನೀಡುವ ಒಂದು ಉತ್ತಮ ಕೃತಿ ಆಗುತ್ತದೆ ಎಂಬ ವಿಶ್ವಾಸ ನನಗಿದೆ. ಪುಸ್ತಕವು ಸುಂದರವಾಗಿ ಮುದ್ರಣಗೊಂಡು ಸಮಾಜ ಬಾಂಧವರಿಗೆ -ದೊರಕುವಂತಾಗಲಿ. ಈ ಹೊತ್ತಗೆ ಸಮಾಜ ಬಾಂಧವರಿಗೆ -ದಾರಿದೀಪವಾಗಲಿ. ಸಮಾಜ ಬಾಂಧವರು ಪುಸ್ತಕವನ್ನು ಖರೀದಿಸಿ ಅದರಲ್ಲಿರುವ ಉತ್ತಮ ಮಾಹಿತಿಯ ಉಪಯೋಗವನ್ನು ಪಡೆಯಲಿ = ಎಂದು ಹಾರೈಸುತ್ತಾ ಶುಭ ಕೋರುವ-
- ಮಾಲಾಡಿ ಅಜಿತ್ ಕುಮಾರ್ ರೈ -
ಅಧ್ಯಕ್ಷರು, ಬಂಟರ ಯಾನೆ ನಾಡವರ ಮಾತೃ ಸಂಘ (ರಿ)
ಬಂಟ್ಸ್ ಹಾಸ್ಟೆಲ್, ಮಂಗಳೂರು - 575 008