ಅಭಿನಂದನಾ ಮಾತು
ಎಂ. ಮಲ್ಲಿಕಾ ಪ್ರಸಾದ
ಆತ್ಮೀಯರಾದಂಥ ದಂಬೆಕ್ಕಾನ ಸದಾಶಿವ ರೈಯವರಿಗೆ ನನ್ನತೆ ವಂದನೆಗಳು.
ನಿಮ್ಮ ಈ ಒಂದು ಬಂಟ ಸಮಾಜದ ಮದುವೆಯನ್ನು-ನಡೆಸಿಕೊಡುವ ನಿರೂಪಕರಿಗೆ ನೀವು ಬರೆದಂಥ ಕೈಪಿಡಿಯು ಅತ್ಯಂತ ಅದ್ಭುತವಾಗಿದೆ. ನಿಮಗೆ ಮತ್ತು ನಿಮ್ಮ ಈ ಕೈಪಿಡಿಯಲ್ಲಿ ಸೂಚಿಸಲಾದ ಸಲಹೆ ಸೂಚನೆಗಳು ಅತ್ಯಂತ ಮಹತ್ವದ್ದಾಗಿದೆ. ನಿಮಗೆ ನಾನು ಮನದಾಳದಿಂದ ಅಭಿನಂದನೆಯನ್ನು ಸಲ್ಲಿಸುತ್ತಾ ಇದ್ದೇನೆ.
ಬಂಟ ಸಮಾಜದಲ್ಲಿ ನಾವು ನಮ್ಮ ಹಿರಿಯರಿಂದ ಕಲಿತ ಪ್ರಾಚೀನ ಕಾಲದ ಕ್ರಮಗಳು ರೀತಿ, ನೀತಿಗಳು ಎಲ್ಲವೂ ಪ್ರಸ್ತುತ ಕಾಲಘಟ್ಟದಲ್ಲಿ ಅದು ಅತೀ ಅಗತ್ಯ. ಆದುದರಿಂದ ನಾವು ನಮ್ಮ ಹಿಂದಿನ ಕಾಲದ ರಿವಾಜುಗಳನ್ನು ಬಿಟ್ಟು, ನಮ್ಮದೇ ಶೈಲಿಯಲ್ಲಿ ಯಾವುದೇ ಶುಭ ಸಮಾರಂಭಗಳನ್ನು ಮಾಡಬಾರದು. ಇದರಿಂದ ನಮ್ಮ ತಾಯಿ-ತಂದೆ. ಗುರುಹಿರಿಯರು ಮತ್ತು ಎಲ್ಲರನ್ನು ಗೌರವಿಸುವ ಸಂಸ್ಕೃತಿಯನ್ನು ಕಲಿಯುತ್ತೇವೆ. ಇದನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಈ ಕೈಪಿಡಿಯು ನಮ್ಮ ಸಮಾಜ ಬಾಂಧವರಿಗೆ ಒಂದು ಆಶಾದೀಪವಾಗಲಿ. ಇದನ್ನು ಪಾಲಿಸಿದರೆ ನಾವು ಸಮಾಜದಲ್ಲಿ ಅನೇಕ ಸುಧಾರಣೆಗಳನ್ನು ಯಶಸ್ಸನ್ನು ಕಾಣಬಹುದು. ನೀವು ಇಷ್ಟೊಂದು ಮುತುವರ್ಜಿ ವಹಿಸಿ ಈ ಕೈಪಿಡಿ ಸಂಕಲನವನ್ನು ತಯಾರು ಮಾಡಿದ ನಿಮಗೆ ಮತ್ತೊಮ್ಮೆ ಅಭಿನಂದನೆ ಸಲ್ಲಿಸುತ್ತಾ ನಿಮ್ಮ ಕುಟುಂಬ ಜೀವನವೂ ಅತ್ಯಂತ ಸುಖಮಯವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿ ನನ್ನ ಮಾತುಗಳನ್ನು ಕೊನೆ ಗೊಳಿಸುತ್ತೇನೆ.
ಇತಿ ವಂದನೆಯೊಂದಿಗೆ-
ಎಂ. ಮಲ್ಲಿಕಾ ಪ್ರಸಾದ
ಮಾಜಿ ಅಧ್ಯಕ್ಷರು, ಮಹಿಳಾ ಬಂಟರ ಸಂಘ, ಪುತ್ತೂರು
ಹಾಲಿ ಎಕ್ಸಿಕ್ಯೂಟೀವ್ ಕಮಿಟಿ ಸದಸ್ಯರು