ಚಿಂತನೆಯ ನುಡಿ
ಮೀರಾ ಭಾಸ್ಕರ ರೈ
ಮದುವೆ ಎಂದರೆ ಜೀವನದ ಗಂಡು ಹೆಣ್ಣಿನ ಶಾಶ್ವತ ಬಂಧನ. ಮದುವೆ ಎಂದರೆ ಹೆಣ್ಣಿನ ಪಾಲಿಗೆ ರಕ್ಷಾಕವಚ. ಮದುವೆ ಎಂಬ ಬಂಧನ ಇಲ್ಲದಿದ್ದರೆ ಜೀವನದಲ್ಲಿ ಗಂಡು ಹೆಣ್ಣಿಗೆ ಬೆಲೆ ಇರುತ್ತಿರಲಿಲ್ಲ. ಹಾಗೇ ಗಂಡು ಹೆಣ್ಣಿಗೆ ಮರ್ಯಾದೆಯ ಅಡಿಗಲ್ಲು. ಆರಾಮದಲ್ಲಿ ಪ್ರಪಂಚಕ್ಕೆ ತೋರ್ಪಡಿಸುವಂತಹ ಒಂದು ಕಟ್ಟುಪಾಡು. ತಂದೆ ತಾಯಿಯವರಿಗೆ ಆರಾಮದ ನಿಟ್ಟುಸಿರು. ಮತ್ತು ಮೊಮ್ಮಕ್ಕಳನ್ನು ಪಡೆಯಲು ಕಾನೂನು ಬದ್ಧವಾದ ಒಂದು ಚೌಕಟ್ಟು.
ಒಂದು ಹೆಣ್ಣಿಗೆ ಆರಾಮದಿಂದ ಇರಲು ಜೀವನದ ಒಂದು ಸ್ಥಿರವಾದ ಬಂಧನ. ಮದುವೆ ಇಲ್ಲದೆ ಗಂಡು ಹೆಣ್ಣಿಗೆ ಬದುಕಲು ಸಾಧ್ಯವಿಲ್ಲ. ಯಾಕೆಂದರೆ ಅದಕ್ಕೆ ಬೆಲೆ ಇಲ್ಲ. ಪ್ರಾಣಿಗಳ ಹಾಗೆ ಜೀವಿಸಲು ಸಾಧ್ಯವಿಲ್ಲ.
ಮದುವೆ ಆಗುವುದಿದ್ದರೂ ಹಿರಿಯರ ಆಶೀರ್ವಾದ, ದೇವರ ಕೃಪೆ, ಬಂಧು-ಬಾಂಧವರ ಸಮ್ಮುಖದಲ್ಲಿ ಆಗಬೇಕು. ಆಗ ಇದಕ್ಕೆ ಸಿಗುವ ಬೆಲೆಯೇ ಬೇರೆ. ಹಾಗೇ ಅವರ ಸಾಕ್ಷಿಯೂ ಬೇಕು. ಆಮೇಲೆ ಏನು ಏರುಪೇರಾಗುವುದಿದ್ದರೂ ಹಿರಿಯರ ಸಾಕ್ಷಿ ಇರುತ್ತದೆ.
ವಿಜಾತಿ ಮದುವೆ ಯಾವತ್ತೂ ಸರಿಯಲ್ಲ. ಯಾಕೆಂದರೆ ಯಾವುದೇ ತಂದೆ ತಾಯಿಗೂ ಇದು ಇಷ್ಟವಿರುವುದಿಲ್ಲ. ಜೀವನ ಪರ್ಯಂತ ಕೊರಗಿನಲ್ಲೇ ಕೈ ತೊಳೆಯುತ್ತಾರೆ.
ಆಮೇಲೆ ಮಕ್ಕಳು ಮರಿಗಳು ಆದ್ರೂ ಅವರಿಗೆ ಸಮಾಜದಲ್ಲಿ ಸ್ಥಾನಮಾನ ಸಿಗುವುದಿಲ್ಲ. ಎಲ್ಲರೂ ಕೈ ತೋರಿಸುವಂತಾಗುತ್ತದೆ. ಮತ್ತು ಅವರಿಗೆ ಮದುವೆಯ ಸಂದರ್ಭ ಬರುವಾಗ ಯಾವ ಜಾತಿ ಎಂದು ತೀರ್ಮಾನಿಸಲು ಆಗುವುದಿಲ್ಲ. ಒಳ್ಳೆ ಯೋಗ್ಯ ವ್ಯಕ್ತಿ ಸ್ವಲ್ಪ ಯೋಚಿಸುತ್ತಾನೆ.
ಪ್ರೀತಿ ಮದುವೆಯೂ ಸರಿಯಲ್ಲ. ಆದ್ರೆ ಅವರ ಸ್ಥಾನದಲ್ಲಿ ನಿಂತು ನೋಡಿದ್ರೆ ಒಬ್ಬನನ್ನೇ ಪ್ರೀತಿಸಿ, ಅವನನ್ನೇ ಮದುವೆ ಆದ್ರೆ ಅದು ಉತ್ತಮ. ಯಾಕೆಂದರೆ ಅವರ ಸಂಸಾರವೂ ಎಡರು-ತೊಡರು ಇಲ್ಲದೆ ಉತ್ತಮವಾಗಿ ಜೀವನ ಸಾಗುತ್ತದೆ. ಸಂಸಾರ ಉತ್ತಮವಾಗಿರುತ್ತದೆ. ಒಬ್ಬನನ್ನು ಪ್ರೀತಿಸಿ, ಇನ್ನೊಬ್ಬನನ್ನು ಮದುವೆಯಾಗುವುದು ವ್ಯಭಿಚಾರವಾಗುತ್ತದೆ.
ಹಿಂದಿನ ಕಾಲದಲ್ಲಾದರೆ ರಿಜಿಸ್ಟರ್ ಮದುವೆಯ ಅಗತ್ಯ ಇರಲಿಲ್ಲ. ಯಾಕೆಂದರೆ ಹೆಣ್ಣಿಗೆ ತುಂಬಾ ತಾಳ್ಮೆ, ಸಹನೆ, ಪ್ರೀತಿ, ಗೌರವ ಎಲ್ಲಾ ಇತ್ತು. ಆದ್ರೆ ಈಗಿನ ಕಾಲದಲ್ಲಿ ಗಂಡು ಹೆಣ್ಣು ಇಬ್ಬರೂ ಕಲಿತು ಯಾರಿಗೂ ಕಡಿಮೆ ಇಲ್ಲದಂತೆ ಬದುಕುತ್ತಾರೆ. ಬರುತ್ತಾರೆ. ಆಗ ಹೆಣ್ಣು ಇಬ್ಬರೂ ದುಡಿದು ಸುಸ್ತಾಗಿ ಮನೆಗೆ ಮನೆಯಲ್ಲಿ ಅವಳ ಹಕ್ಕಿನಂತೆ ಅಡಿಗೆ ಕೆಲಸ ಮಾಡಲು ಶುರು ಮಾಡುತ್ತಾಳೆ. ಆಗ ಅವಳಿಗೆ ಸುಸ್ತಾಗಿ ಚಿಕ್ಕ ಪುಟ್ಟ ವಿಷಯಕ್ಕೆ ಸಿಟ್ಟು ಬರುತ್ತದೆ. ಗಂಡಾದವನು ಆರಾಮದಿಂದ ಕೂತಿರುವಾಗ ಅದನ್ನು ನೋಡಿ ಹೆಂಡ್ತಿಗೆ ಬೇಸರ ಬಂದು, ಏನಾದ್ರೂ ಜಗಳ ಮಾಡುತ್ತಾಳೆ. ಆಗ ಅದು ವಿಚ್ಛೇದನದವರೆಗೆ ಬರುತ್ತದೆ. ನಾನು ನಿನ್ನಿಂದ ಕಡಿಮೆ ಇಲ್ಲ ಎಂದು ಜಗಳ ಮಾಡುತ್ತಾರೆ. ಅದಕ್ಕಾಗಿ ಹಿರಿಯರ ಮಾರ್ಗದರ್ಶನಕ್ಕೆ ಕಾನೂನು ಕಟ್ಟಲೆಗೆ ರಿಜಿಸ್ಟರ್ ಆದ್ರೆ ಒಳ್ಳೆಯದು.
ನಮ್ಮ ಮದುವೆ ಎಂಬ ಬಂಧನಕ್ಕೆ ನಿಶ್ಚಿತ ಪದ್ಧತಿ ಬೇಕು. ಒಟ್ಟಾರೆ ಆದ್ರೆ ನಮಗೂ ಪ್ರಾಣಿಗಳಿಗೂ ವ್ಯತ್ಯಾಸವಿರುವುದಿಲ್ಲ. ಒಂದು ಪದ್ಧತಿ ಅಂತ ಇದ್ರೆ ಅದು ಮುಂದಿನ ಜನಾಂಗಕ್ಕೂ ಕಾನೂನು ಅಂತ ಅನಿಸುತ್ತದೆ. ಅದು ವಂಶ ವಂಶಕ್ಕೂ ಕಟ್ಟುಪಾಡು ಅನಿಸುತ್ತದೆ.
ಹಾಗೇ ಮದುವೆಗೆ ಮುಹೂರ್ತ ಬೇಕೇ ಬೇಕು. ಅದನ್ನು ನೋಡಿಯೇ ಮದುವೆ ಪಾರ್ಟಿಯವರು ಸಜ್ಜಾಗುತ್ತಾರೆ.
ಮದುವೆಗೆ ಬರುವವರಿಗೂ ಸಮಯಪ್ರಜ್ಞೆ ಇರುತ್ತದೆ. ಯಾವ ವಿಷಯಕ್ಕಾದರೂ ಸಮಯಪ್ರಜ್ಞೆ ಪ್ರಾಮುಖ್ಯ.
ಅಂತೂ ಈಗಿನ ಕಾಲದಲ್ಲಿ ಜನರೆಲ್ಲರೂ ಅವಸರದಲ್ಲಿರುತ್ತಾರೆ.
ಅದಕ್ಕಾಗಿ ಸಮಯ ಮುಹೂರ್ತ ಬೇಕು. ಮದುವೆಗೆ ಸಾಕ್ಷಿ ದೇವರ ದೀಪ ಹಾಗೂ ನಮಗೆ ಜನ್ಮ ಕೊಟ್ಟ ತಂದೆ ತಾಯಿ ಮತ್ತು ನಮ್ಮನ್ನು ಹೊತ್ತಿರುವ ಭೂಮಾತೆ.
ಕೊನೆಯದಾಗಿ, ಆಮಂತ್ರಣ ಪತ್ರಿಕೆ. ಜನರನ್ನು ಆಮಂತ್ರಿಸಲು, ಒಂದು ಕರೆಯೋಲೆ ಮತ್ತು ಘಳಿಗೆ, ಮುಹೂರ್ತ ಸ್ಥಳ, ದಿವಸಗಳನ್ನು ನೋಡಲು ಒಂದು ಕರೆ.
ಮೀರಾ ಭಾಸ್ಕರ ರೈ
ಅಧ್ಯಕ್ಷರು, ಮಹಿಳಾ ಬಂಟರ ಸಂಘ, ಪುತ್ತೂರು