ಶುಭ ಹಾರೈಕೆಗಳು
ರಾಜಶ್ರೀ ಟಿ. ರೈ, ಪೆರ್ಲ
ಎಲ್ಲವೂ ಎಲ್ಲದರೊಂದಿಗೆ ಬೆರೆತುಕೊಂಡು ಸ್ವಂತ ಅಸ್ಮಿತೆ ಯೆಂಬುದು ಗೌಣವಾಗುತ್ತಾ ಆಧುನಿಕ ವರ್ತಮಾನ ತನ್ನತನ ತೋರಿಸುತ್ತಿರುವ ಹೊತ್ತಿಗೆ ಸಂಸ್ಕೃತಿಯ ಆವರಣದ ಒಳಗೆ ಭದ್ರವಾಗಿರುವ ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಕಾಪಿಟ್ಟುಕೊಳ್ಳುವ ಔಚಿತ್ಯ ಏನು ಮತ್ತು ಎಷ್ಟರ ಮಟ್ಟಿನದು ಎಂಬುದು ಚಿಂತಿಸಬೇಕಾದ ವಿಚಾರ.
ಖ್ಯಾತ ಮಾನವಶಾಸ್ತ್ರಜ್ಞ ಯುವಾಲ್ ನೋವಾ ಹರಾರಿ ಅವರ Bees don't need lawyers, because there is no danger that they might forget or violate the hive constitution. The queen does not chear the cleaner bees of their food, and they never go on strike demanding higher wages.
But humans do such things all the time. Because the Sapiens social order is imagined, humans cannot preserve the critical information for running it simply by making copies of their DNA and passing these on to their progeny A conscious effort has to be made to sustain laws, customs, procedures and manners, otherwise the social order would quickly collapse ಎಂಬ ಮಾತಿನ ಒಳಮರ್ಮವನ್ನು ನಾವು ಅರ್ಥಮಾಡಿಕೊಳ್ಳಬೇಕು.
ನಮ್ಮ ಬದುಕನ್ನು ಸುಸಂಸ್ಕೃತ ಶಿಸ್ತಿನ ಚೌಕಟ್ಟಿನಲ್ಲಿ ಇರಿಸಿ ಕೊಳ್ಳಲು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಒಪ್ಪಿ ಅಪ್ಪಿಕೊಳ್ಳುವುದು ಬಹುಮಟ್ಟಿಗೆ ಸಾಧುವೆನ್ನಿಸುತ್ತದೆ.
ವಿವಾಹವೆನ್ನುವುದು ಆಚರಣೆಯ ಜೊತೆ ಜೊತೆಗೆ ಮನಸ್ಸಿಗೆ ಆಹ್ಲಾದಕತೆ ನೀಡುವ ಸಂಭ್ರಮ. ಬಾಹ್ಯ ಸಂಭ್ರಮಕ್ಕಿಂತ ಮನುಷ್ಯನ ಮಾನಸಿಕ ದೈಹಿಕ ಸಂಬಂಧದ ಬದ್ಧತೆಯೇ ಇಲ್ಲಿ ಕೊನೆಯವರೆಗೆ ಪ್ರಸ್ತುತವಾಗುವುದು ಎನ್ನುವುದನ್ನು ನಾವು ಮರೆಯುವಂತಿಲ್ಲ.
ಬಂಟ ಸಮಾಜದ ಆಚರಣೆ, ಜೀವನಶೈಲಿ ಮತ್ತು ಸಂಪ್ರದಾಯಗಳು ಮಾತೃಪ್ರಧಾನ ಕುಟುಂಬ ವ್ಯವಸ್ಥೆಯೊಂದಿಗೆ ಉತ್ತಮ, ಆರೋಗ್ಯಪೂರ್ಣ ಮಾನವ ಜನ್ಮದ ಆಶಯಗಳನ್ನು ಪ್ರತಿಬಿಂಬಿಸುತ್ತವೆ. ಇಲ್ಲಿ ಹತ್ತು ಹೆಜ್ಜೆ ಹಾದಿಗೊಂದು ಇಂಚು ಬದಲಾವಣೆ ಸಹಜವಾಗಿ ಸಂಭವನೀಯವಾದರೂ ಬಂಟರಲ್ಲಿ ಮದುವೆಯ ಕಟ್ಟಳೆಯ ನಿಖರ ಮತ್ತು ಸಮಗ್ರ ಕೈಪಿಡಿಯನ್ನು ಸಿದ್ಧಪಡಿಸುವ ಈ ಪ್ರಯತ್ನ ಒಳ್ಳೆಯ ನಡೆ. ಇದು ಓರ್ವ ವ್ಯಕ್ತಿಯ ಮನಸ್ಥಿತಿಯ ಫಲಿತವಲ್ಲ. ಹಲವು ಹಿರಿಯರ ಮಥಿತ ಅರಿವಿನ ಫಲ. ಕಾಲದ ಪ್ರವಾಹದಲ್ಲಿ ಆದ ಕಲಬೆರಕೆಯ ಕೊಳೆ ಇರದೆ ಉತ್ತಮ ಆಶಯ ಮತ್ತು ಸದುದ್ದೇಶದಿಂದ ಮೂಡಿ ಬಂದ ಈ ಕೃತಿ ಸಹಜವಾಗಿಯೇ ಒಂದು ಸಮುದಾಯದ ನಡವಳಿಕೆಯಲ್ಲಿ ಏಕತೆಯ ಶಿಸ್ತನ್ನು ಕಟ್ಟಿಕೊಡುವ ದೃಷ್ಟಿಯಲ್ಲಿ ಬಹು ಅಮೂಲ್ಯ. ಹಿರಿಯರಿಗೆ ಒಪ್ಪಿಗೆಯಾಗುವ ಅಂತೆಯೇ ಕಿರಿಯರಿಗೆ ದಾರಿದೀಪ ವಾಗುವ ಹೊತ್ತಗೆಯ ಹೂರಣವನ್ನು ಬಡಿಸುತ್ತಿರುವ ಹಿರಿಯರಾದ ದಂಬೆಕ್ಕಾನ ಸದಾಶಿವ ರೈ ಅವರಿಂದ ಆಶೀರ್ವಾದ ವನ್ನು ಬೇಡುತ್ತಾ ಶುಭ ಹಾರೈಕೆಗಳೊಂದಿಗೆ-
- ಶ್ರೀಮತಿ ರಾಜಶ್ರೀ ಟಿ. ರೈ, ಪೆರ್ಲ