ಪುಸ್ತಕದ ಮುಖಪುಟ

ಪುಸ್ತಕದ ಮುಖಪುಟ

ಆಶಯದ ಮಾತು- ಚಿಲ್ಕೆತ್ತಾರು ಎ. ಜಗಜೀವನ್ದಾಸ್ ರೈ

 ಆಶಯದ ಮಾತು

ಚಿಲ್ಕೆತ್ತಾರು ಎ. ಜಗಜೀವನ್ದಾಸ್ ರೈ

ದಂಬೆಕ್ಕಾನ ಸದಾಶಿವ ರೈಗಳಿಗೆ ಭಾರತ ದೇಶದ ಬಗ್ಗೆ, ಹಿಂದೂ ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ವಿಶೇಷ ಆಸಕ್ತಿ ಹಾಗೂ ಕಾಳಜಿ. ಶಿಸ್ತು ಮತ್ತು ಉತ್ತಮ ಆಚಾರ-ವಿಚಾರಗಳನ್ನು ರೂಢಿಸಿಕೊಂಡು ಬಂದಿರುವ ಇವರು ಎಲ್ಲರಿಗೂ ಮಾದರಿ ಯಾಗುವಂತಹ ಜೀವನವನ್ನು ನಡೆಸುತ್ತಿದ್ದಾರೆ. ಕುಟುಂಬ ಪದ್ಧತಿ ಹೇಗಿರಬೇಕು, ಅಲ್ಲಿನ ಆಚಾರ-ವಿಚಾರಗಳು ಹೇಗಿರಬೇಕು. ದೇವರಲ್ಲಿ ನಂಬಿಕೆ, ಗುರುಹಿರಿಯರಿಗೆ ಗೌರವ, ಇವರ ಜೀವನದಲ್ಲಿ ಅಳವಡಿಸಿಕೊಂಡಿರುವ ವಿಚಾರಗಳು.

ಕಷ್ಟದಲ್ಲಿದ್ದವರಿಗೆ ನೆರವಾಗುವುದು, ಸಭೆ-ಸಮಾರಂಭವನ್ನು ಯೋಗ್ಯ ರೀತಿಯಲ್ಲಿ ನಡೆಸುವುದು ಇವರ ವಿಶಿಷ್ಟತೆ. 

ದಂಬೆಕ್ಕಾನ ಸದಾಶಿವ ರೈಗಳು ಬಂಟ ಸಮುದಾಯದ ಮದುವೆ ಒಂದೇ ರೀತಿ ಕ್ರಮಬದ್ಧವಾಗಿ ಬಂಟ ಸಂಸ್ಕೃತಿಯಂತೆ ಹೇಗೆ ನಡೆಯಬೇಕೆಂದು ತಮ್ಮ ಈ ಕೃತಿಯಲ್ಲಿ ತಿಳಿಸಿದ್ದಾರೆ.

ನಮ್ಮದು ಅಳಿಯ ಸಂತಾನ. ಹೆಣ್ಣಿಗೆ ಅಗ್ರಸ್ಥಾನ. ಆದ್ದರಿಂದ ಹೆಣ್ಣಿಗೆ ಮದುವೆ ಮಾಡುವಾಗ ಧಾರೆ ಏರಿಸಿ ಕೊಡುವುದು ನಮ್ಮ ಸಂಪ್ರದಾಯ. ಧಾರೆ ಎರೆದು ಕುಟುಂಬದಿಂದ ಹೊರಗೆ ಕಳುಹಿಸುವುದು ನಮ್ಮ ಸಂಪ್ರದಾಯವಲ್ಲ.

ಸದಾಶಿವ ರೈಗಳು ಕಳೆದ ಹಲವಾರು ವರ್ಷಗಳಿಂದ ಮದುವೆ ಕಾರ್ಯಕ್ರಮವನ್ನು ಕ್ರಮಬದ್ಧವಾಗಿ ನಡೆಸಿ ಅನುಭವ ಉಳ್ಳವರು. ಗಡಿಬಿಡಿ, ತಪ್ಪುಗಳನ್ನು ಸರಿಪಡಿಸಲು ಹಾಗೂ ಶಿಸ್ತುಬದ್ಧವಾಗಿ ವಿವಾಹ ಕಾರ್ಯಕ್ರಮ ನೆರವೇರಿಸಲು ಈ ಪುಸ್ತಕವನ್ನು ಬಹಳ ಶ್ರಮಪಟ್ಟು ಸಾಕಷ್ಟು ಸಂಶೋಧನೆ ಮಾಡಿ ಬರೆದಿದ್ದಾರೆ.

ಈ ಪುಸ್ತಕ ಬಂಟ ಸಮಾಜದ ವಿವಾಹ ಕಾರ್ಯಕ್ರಮದಲ್ಲಿ ಎಲ್ಲಾ ಬಂಟ ಬಂಧುಗಳಿಗೆ ಉಪಯುಕ್ತವಾಗಲಿ ಹಾಗೂ ಎಲ್ಲಾ ಬಂಟರ ವಿವಾಹ ಕಾರ್ಯಕ್ರಮ ಒಂದೇ ರೀತಿಯಲ್ಲಿ ಶಿಸ್ತುಬದ್ಧ ವಾಗಿ ನಡೆಸಲು ಪ್ರೇರಣೆಯಾಗಲಿ ಎಂದು ನಮ್ಮೆಲ್ಲರ ಆಶಯ.

ಚಿಲ್ಕೆತ್ತಾರು ಎ. ಜಗಜೀವನ್ದಾಸ್ ರೈ 

ನಿವೃತ್ತ ಎ.ಜಿ.ಎಂ., ವಿಜಯಾ ಬ್ಯಾಂಕ್