ಪುಸ್ತಕದ ಮುಖಪುಟ

ಪುಸ್ತಕದ ಮುಖಪುಟ

ಪ್ರಸ್ತಾವನೆ - ದಂಬೆಕ್ಕಾನ ಸದಾಶಿವ ರೈ

 ಪ್ರಸ್ತಾವನೆ

ದಂಬೆಕ್ಕಾನ ಸದಾಶಿವ ರೈ

ನಾನು ಈ ಮೊದಲು ಬಂಟ ಮದುವೆಯ ಬಗ್ಗೆ ಪ್ರಕಟಿಸಿದ ಎರಡು ಪುಸ್ತಕಗಳ ಅನುಭವದ ಆಧಾರದಲ್ಲಿ ಹಾಗೂ ಅನೇಕ ಹಿರಿಯರ ಮಾರ್ಗದರ್ಶನದಲ್ಲಿ ಒಂದು ಕಿರು ಕೈಪಿಡಿಯ ಅವಶ್ಯಕತೆಯನ್ನು ಮನಗಂಡು ಮುಂದಡಿಯಿಟ್ಟಿದ್ದೇನೆ.

ಎಲ್ಲಾ ಬಂಟ ಮನೆಗಳಲ್ಲಿ ಈ ಕಿರು ಪುಸ್ತಕ ಹರಿದಾಡು ವಂತಾಗಲಿ ಎಂಬುದು ನನ್ನ ಆಶಯ. ಹಿರಿಯರಿಂದ ಕೇಳಿ ತಿಳಿದುಕೊಂಡಂತಹ ವಿಚಾರಗಳನ್ನು ಮಂಡಿಸಿದ್ದೇನೆ. ಇನ್ನೂ ಅನೇಕ ಹಿರಿಯರನ್ನು ಭೇಟಿ ಮಾಡಬೇಕಿತ್ತು. ನನ್ನಿಂದಾಗಿಲ್ಲ. ಅದಕ್ಕಾಗಿ ಕ್ಷಮೆ ಯಾಚಿಸುತ್ತಿದ್ದೇನೆ. ಈ ಬಗ್ಗೆ ತಮ್ಮ ಅನುಭವದ ವಿಚಾರಗಳನ್ನು ವಿಮರ್ಶಿಸಿ ಮುಂದಿನ ಪ್ರಕಟಣೆಯಲ್ಲಿ ಸೇರ್ಪಡೆ ಗೊಳಿಸೋಣ. ಆ ನಿಟ್ಟಿನಲ್ಲಿ ತಮ್ಮ ಸಹಕಾರ ಬಯಸುತ್ತಿದ್ದೇನೆ. 

ನನಗೆ ಮಾಹಿತಿ ಕೊಟ್ಟು ಸಹಕರಿಸಿದ ಎಲ್ಲಾ ಹಿರಿಯ ಮಹನೀಯರುಗಳಿಗೆ, ಪುಸ್ತಕ ಬರೆದು ಪ್ರಕಟಿಸಲು ಪ್ರೇರೇಪಿಸಿದ ನನ್ನೆಲ್ಲಾ ಆತ್ಮೀಯರಿಗೆ, ಕಾರ್ಯಕ್ರಮ ನೋಡಿ, ಮೆಚ್ಚುಗೆ ವ್ಯಕ್ತಪಡಿಸಿ, ಹುರಿದುಂಬಿಸಿದ ಅನೇಕ ಮಹನೀಯರುಗಳಿಗೆ ನನ್ನ ತುಂಬು ಹೃದಯದ ಕೃತಜ್ಞತೆಗಳು.

ಈ ಸಣ್ಣ ಕೈಪಿಡಿಗೆ ಮುನ್ನುಡಿಯನ್ನು ದಯಪಾಲಿಸಿ, ಇದರ ಮಹತ್ವವನ್ನು ತಿಳಿಯಪಡಿಸಿ, ಪುಸ್ತಕದ ಘನತೆಯನ್ನು ಬೆಳಗಿಸಿದ ನನ್ನ ಆತ್ಮೀಯ ಬಂಧುವಾದ ಶ್ರೀ ಮೋಹನ ಆಳ್ವರಿಗೆ ಹೃದಯ ತುಂಬಿದ ನಮನಗಳು.

ಈ ಕಿರುಹೊತ್ತಗೆ ಹೊರತರಲು ಎಲ್ಲಾ ರೀತಿಯ ಸಹಕಾರ ನೀಡಿ ಬೆನ್ನುಡಿಯನ್ನು ಕೊಟ್ಟು ಬಿಡುಗಡೆಯ ಎಲ್ಲಾ ಜವಾಬ್ದಾರಿಯನ್ನು ವಹಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ನನ್ನ ಆತ್ಮೀಯರಾದ ಶ್ರೀ ಕಾವು ಹೇಮನಾಥ ಶೆಟ್ಟಿಯವರಿಗೆ ಅನಂತಾನಂತ ಕೃತಜ್ಞತೆಗಳು.

ಮಾತೃ ಸಂಘದ ಅಧ್ಯಕ್ಷರ ನೆಲೆಯಲ್ಲಿ ಶುಭಾಶಂಸನೆ ಗೈದ ಹಾಗೂ ಈ ಪುಸ್ತಕ ಬಿಡುಗಡೆಯ ಹೊಣೆಯನ್ನು ತಮ್ಮ ಸಂಘಟನೆಯ ಮುಖಾಂತರ ಬಿಡುಗಡೆಗೊಳಿಸಲು ಪ್ರಾಮಾಣಿಕ ವಾಗಿ ಸಹಕರಿಸಿದ ಶ್ರೀ ಅಜಿತ್ ಕುಮಾರ್ ರೈ ಮಾಲಾಡಿಯವರಿಗೆ ಹಾಗೂ ಅವರ ಕಾರ್ಯಕಾರಿ ಸಮಿತಿಯ ಸದಸ್ಯರಿಗೂ ಮನಃಪೂರ್ವಕ ವಂದನೆಗಳು.

ಸಂದೇಶಗಳನ್ನು ಕಳುಹಿಸಿ ಪ್ರೋತ್ಸಾಹಿಸಿದ ಎಲ್ಲಾ ನನ್ನ ಬಂಧು-ಭಗಿನಿಯರಿಗೆ ಮನದಾಳದ ಕೃತಜ್ಞತೆಗಳು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರ ನೆಲೆಯಲ್ಲಿ ಶ್ರೀ ಐಕಳ ಹರೀಶ್ ಶೆಟ್ಟಿಯವರ ಸಂದೇಶ ಮತ್ತು ಅವರ ಮನಃಪೂರ್ವಕ ಸಹಕಾರಕ್ಕಾಗಿ ಹಾಗೂ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರಿಗೂ ಮನದುಂಬಿದ ಅಭಿವಂದನೆಗಳು.

ಪುತ್ತೂರು ಬಂಟರ ಸಂಘದ ಮಾಜಿ ಹಾಗೂ ಹಾಲಿ ಆಡಳಿತ ಸಮಿತಿಯ ಎಲ್ಲಾ ಸದಸ್ಯರುಗಳಿಗೆ ವಂದನೆಗಳು.

ಕೈಪಿಡಿಯ ಪ್ರತಿಯನ್ನು ಮುಖಪುಟದೊಂದಿಗೆ ವಿನ್ಯಾಸ ಗೊಳಿಸಿ, ಪುಸ್ತಕರೂಪ ನೀಡಿ ಎಲ್ಲಾ ರೀತಿಯ ಸಹಕಾರ ನೀಡಿದ ಶ್ರೀಮತಿ ಜಯಲಕ್ಷ್ಮೀ ಎಸ್. ಜೋಯಿಸ್ ಇವರಿಗೆ ಹೃದಯಾಂತರಾಳದ ಕೃತಜ್ಞತೆಗಳು.

ಅಂದ ಚಂದವಾಗಿ ಸಕಾಲದಲ್ಲಿ ಮುದ್ರಣ ಮಾಡಿಕೊಟ್ಟ ಹೊಸ ದಿಗಂತ ಮುದ್ರಣಾಲಯದ ಸರ್ವರಿಗೂ ವಂದನೆಗಳು.

- ದಂಬೆಕ್ಕಾನ ಸದಾಶಿವ ರೈ

ನೂಜಿ ತರವಾಡು ಮನೆ

ಕೆಯ್ಯೂರು ಗ್ರಾಮ, ಅಂಚೆ : ಮಾಡಾವು ಪುತ್ತೂರು ತಾಲೂಕು, 

ದ. ಕ. ಜಿಲ್ಲೆ, ಕರ್ನಾಟಕ - 574 210

ಮೊಬೈಲ್: 8277558477, 9980879993