ಪುಸ್ತಕದ ಮುಖಪುಟ

ಪುಸ್ತಕದ ಮುಖಪುಟ

ಸಂದೇಶ CA ಸುಧೀರ್ ಕುಮಾರ್ ಶೆಟ್ಟಿ

 ಸಂದೇಶ

CA ಸುಧೀರ್ ಕುಮಾರ್ ಶೆಟ್ಟಿ

ಆದರಣೀಯರೇ,

ಬಂಟ ಸಮಾಜದ ಆಚಾರ-ವಿಚಾರ, ನಡೆ-ನುಡಿಗಳ ಬಗ್ಗೆ ಸರಿಯಾದ ತಿಳುವಳಿಕೆಯ ಕೊರತೆ ಇರುವ ಈ ಕಾಲಘಟ್ಟದಲ್ಲಿ ನಿಮ್ಮ ಈ ಕೈಪಿಡಿ ಅತ್ಯಂತ ಮಹತ್ವದ ಪಾತ್ರ ವಹಿಸುವುದರಲ್ಲಿ ಎರಡು ಮಾತಿಲ್ಲ. ಬಂಟರ ಶುಭಕಾರ್ಯಗಳಲ್ಲಿ ಅತ್ಯಂತ ಮಹತ್ವದ ಹಾಗೂ ಪ್ರಾಮುಖ್ಯವಾದ ಮದುವೆ ಸಮಾರಂಭ ಯಾವ ರೀತಿಯಲ್ಲಿ ನಡೆಯಬೇಕು, ನಿಶ್ಚಿತಾರ್ಥ ವಿಧಿಯಿಂದ ತೊಡಗಿ, ಮದುವೆ ಮಂಟಪದ ನಿರ್ವಹಣೆ, ತದನಂತರದ ವಿಧಿ-ವಿಧಾನಗಳನ್ನು ಸವಿವರವಾಗಿ ನೀವು ವಿವರಿಸಿದ್ದೀರಿ.

ನಿಮ್ಮ ಈ ಕೃತಿಯಿಂದ ಮದುವೆ ಸಮಾರಂಭಗಳು ನಮ್ಮ ಪುರಾತನ ಪದ್ಧತಿಯನ್ನು ಅಳವಡಿಸಿಕೊಂಡು ಒಂದೇ ರೀತಿಯಲ್ಲಿ ನಡೆಸಿಕೊಳ್ಳಲು ಸಹಕಾರಿಯಾಗಲಿದೆ ಎನ್ನುವುದಕ್ಕೆ ಯಾವುದೇ ಸಂಕೋಚವಿಲ್ಲ. ಒಂದೊಮ್ಮೆ ದಿ। ಮೂಲ್ಕಿ ಹರಿಪೂಂಜರ, ದಿ। ವಕೀಲ ಸೀತಾರಾಮ ಶೆಟ್ಟರ ಮುತುವರ್ಜಿಯಲ್ಲಿ ಮದುವೆ ಮಂಟಪದಲ್ಲಿ ಮಾರ್ಗದರ್ಶನ ಕಾಣಸಿಗುತ್ತಿತ್ತು. ಈಗ ಅಲ್ಲೊಂದು ಇಲ್ಲೊಂದು ಸಮಾರಂಭದಲ್ಲಿ ಬೆರಳೆಣಿಕೆಯಷ್ಟು ಹಿರಿಯರು  ಮಾರ್ಗದರ್ಶನ ಮಾಡುವುದನ್ನು ಹೊರತುಪಡಿಸಿ, ಹೆಚ್ಚಿನ ಕಡೆಯಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮದುವೆ ಮಂಟಪದ ಕಾರ್ಯ ನಿರ್ವಹಿಸುವುದನ್ನು ನಾವು ಕಾಣುತ್ತಿದ್ದೇವೆ. ನೀವು ಬಹಳ ಶ್ರಮದಿಂದ, ಹಲವು ಮೂಲಗಳಿಂದ ಮಾಹಿತಿ ಸಂಗ್ರಹಿಸಿ, ಮದುವೆ ಸಮಾರಂಭದಲ್ಲಿ ಸಮಾನತೆ ಬಯಸುವ ನಿಟ್ಟಿನಲ್ಲಿ ಈ ಕೈಪಿಡಿ ಮುದ್ರಿಸಿದುದರಿಂದ ಬರುವ ದಿನಗಳಲ್ಲಿ ಗುರಿಕ್ಕಾರರು ಒಂದೇ ರೀತಿಯ ವಿಧಾನಗಳನ್ನು ಅನುಸರಿಸುವರು ಎಂದು ನಂಬುತ್ತೇನೆ.

ಜಾಗತಿಕ ಬಂಟ ಪ್ರತಿಷ್ಠಾನದ ಸರ್ವ ಸದಸ್ಯರಿಗೆ ಈ ಕೈಪಿಡಿಯ ಪ್ರತಿಯನ್ನು ತಲಪಿಸುವ ಕಾರ್ಯವನ್ನು ನಾವು ಮಾಡ ಬಯಸುತ್ತೇವೆ. ನಿಮ್ಮ ಕೈಪಿಡಿಯನ್ನು ಇಂಗ್ಲಿಷ್ಗೆ ಭಾಷಾಂತರ ಮಾಡಿ ಮುದ್ರಿಸುವ ಕಾರ್ಯ ನಡೆದರೆ, ನಮ್ಮ ಮುಂದಿನ ಪೀಳಿಗೆಗೆ ಇದನ್ನು ಓದಿ, ಮದುವೆ ಸಮಾರಂಭದ ನಿರ್ವಹಣೆಯ ಮಾಹಿತಿ ಪಡೆಯುವಲ್ಲಿ ಸಹಕಾರಿಯಾಗಬಹುದು. ಈ ಸಾಧನೆ ಕೂಡಾ ನಿಮ್ಮಿಂದ ನೆರವೇರುವುದರೊಂದಿಗೆ, ಇನ್ನೂ ಹಲವು ಕೃತಿಗಳನ್ನು ರಚಿಸುವ ಸದವಕಾಶವನ್ನು ಭಗವಂತ ಅನುಗ್ರಹಿಸಲಿ ಎಂದು ಬೇಡುತ್ತಾ,

ಇತೀ,

- CA ಸುಧೀರ್ ಕುಮಾರ್ ಶೆಟ್ಟಿ 

ಯಣ್ಮಕಜೆ                                                                                                                         ಕಾರ್ಯದರ್ಶಿ

27-12-2021                                                                             ಜಾಗತಿಕ ಬಂಟ ಪ್ರತಿಷ್ಠಾನ (ರಿ.), ಮಂಗಳೂರು