ಬಂಟಮದುವೆ ಮುಖಪುಟ

ಬಂಟಮದುವೆ ಮುಖಪುಟ
ದಂಬೆಕ್ಕಾನ ಸದಾಶಿವ ರೈ
ಪುಸ್ತಕ ಓದಲು ಈ ಕೆಳಗಿನ ವಿಷಯಗಳಿಗೆ ಕ್ಲಿಕ್ ಮಾಡಿ

ಸಂದೇಶ - ಕೃಷ್ಣಪ್ರಸಾದ್ ರೈ

 ಸಂದೇಶ

ಕೃಷ್ಣಪ್ರಸಾದ್ ರೈ




ಶ್ರೀಯುತ ದಂಬೆಕ್ಕಾನ ಸದಾಶಿವ ರೈಯವರಿಗೆ ಮಾಡುವ ಸಪ್ರೇಮ ವಂದನೆಗಳು.

ಶ್ರೀಯುತರೇ, ಬಂಟ ಸಮಾಜದ ಆಚಾರ-ವಿಚಾರಗಳು, ತುಳು ಸಂಸ್ಕೃತಿಗಳು ಗೊಂದಲದ ಗೂಡಾಗಿರುವ ಈ ಸಂದರ್ಭದಲ್ಲಿ ಇವುಗಳಿಗೆ ಸಂದರ್ಭಕ್ಕನುಗುಣವಾಗಿ ಮಾರ್ಗಸೂಚಿಯಾಗಿ, ಬಂಟ ಸಮಾಜದ ನಿಶ್ಚಿತಾರ್ಥ, ಮದುವೆಯ ಬಗ್ಗೆ ಕೈಪಿಡಿಯನ್ನು ವಿಶೇಷ ಪುಸ್ತಕ ರೂಪದಲ್ಲಿ ಹೊರತರಲುದ್ದೇಶಿಸಿದ್ದೀರಿ. ಇದು ಸಮಯೋಚಿತವಾಗಿದೆ.

ನಮ್ಮ ಸಮಾಜದಲ್ಲಿ, ನಿಶ್ಚಿತಾರ್ಥ, ಮದುವೆಯಿಂದ ಮೊದಲ್ಗೊಂಡು, ವ್ಯಕ್ತಿಯ ಮರಣದ ತನಕ ಹಲವಾರು ಕಾರ್ಯಕ್ರಮಗಳಿವೆ. ಈ ಕಾರ್ಯಕ್ರಮಗಳು ನಿಶ್ಚಿತ ನಿರ್ದೇಶನಗಳ ಕೊರತೆಯಿಂದ, ಸಮಾಜದ ಕುಟುಂಬದ ಹಿರಿಯರ ಮಾರ್ಗದರ್ಶನದ ಕೊರತೆಯಿಂದ, ತಿಳುವಳಿಕೆಯ ಕೊರತೆಯಿಂದ, ಅನ್ಯ ಸಮಾಜದ ಅನುಕರಣೆಗಳಿಂದ, ಸಮಾಜದ ಕಾರ್ಯಕ್ರಮಗಳ ವಿಧಿ-ವಿಧಾನಗಳು ದಾರಿ ತಪ್ಪಿದಂತಿವೆ. ಆದುದರಿಂದ ನಿಮ್ಮ ಈ ಪ್ರಯತ್ನವು ಸಮಾಜಕ್ಕೆ, ಸಮಾಜದ ಕಾರ್ಯಕ್ರಮಗಳಿಗೆ ದಾರಿದೀಪದಂತೆ, ಪ್ರತಿಯೊಂದು ಮನೆಯಲ್ಲಿಯು ಈ ಪುಸ್ತಕವು ಮಾರ್ಗದರ್ಶಕ ಕೃತಿಯಂತಾಗುವುದರಲ್ಲಿ ಸಂಶಯವಿಲ್ಲ.

ಶ್ರೀಯುತರೇ, ತಮ್ಮಿಂದ ಇನ್ನು ಮುಂದೆಯೂ ಈ ತರಹದ ಸಂಶೋಧನ ಕೃತಿಗಳು ಹೊರಬರಲಿ, ಅವುಗಳಿಂದ ಈಗಿರುವ ಕುಟುಂಬಗಳ ಗುರಿಕ್ಕಾರರ ಕೊರತೆಯು ನೀಗುವಂತಾಗಲಿ, ಸಮಾಜವು ಅಭ್ಯುದಯವನ್ನು ಕಾಣುವಂತಾಗಲಿ, ನೀವು ನಂಬಿರುವ ದೈವ, ದೇವರುಗಳು ನಿಮ್ಮನ್ನು ಸದಾ ಹರಸಿ, ಆಯುರಾರೋಗ್ಯ ಭಾಗ್ಯವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ವಂದನೆಗಳೊಂದಿಗೆ

ಕೃಷ್ಣಪ್ರಸಾದ್ ರೈ

ಕೋಶಾಧಿಕಾರಿ

ಬಂಟರ ಯಾನೆ ನಾಡವರ ಮಾತೃ ಸಂಘ (ರಿ.)

ಬಂಟ್ಸ್ ಹಾಸ್ಟೆಲ್, ಮಂಗಳೂರು - 575 003