ಪುಸ್ತಕದ ಮುಖಪುಟ

ಪುಸ್ತಕದ ಮುಖಪುಟ

ಸಂದೇಶ - ಕೃಷ್ಣಪ್ರಸಾದ್ ರೈ

 ಸಂದೇಶ

ಕೃಷ್ಣಪ್ರಸಾದ್ ರೈ

ಶ್ರೀಯುತ ದಂಬೆಕ್ಕಾನ ಸದಾಶಿವ ರೈಯವರಿಗೆ ಮಾಡುವ ಸಪ್ರೇಮ ವಂದನೆಗಳು.

ಶ್ರೀಯುತರೇ, ಬಂಟ ಸಮಾಜದ ಆಚಾರ-ವಿಚಾರಗಳು, ತುಳು ಸಂಸ್ಕೃತಿಗಳು ಗೊಂದಲದ ಗೂಡಾಗಿರುವ ಈ ಸಂದರ್ಭದಲ್ಲಿ ಇವುಗಳಿಗೆ ಸಂದರ್ಭಕ್ಕನುಗುಣವಾಗಿ ಮಾರ್ಗಸೂಚಿಯಾಗಿ, ಬಂಟ ಸಮಾಜದ ನಿಶ್ಚಿತಾರ್ಥ, ಮದುವೆಯ ಬಗ್ಗೆ ಕೈಪಿಡಿಯನ್ನು ವಿಶೇಷ ಪುಸ್ತಕ ರೂಪದಲ್ಲಿ ಹೊರತರಲುದ್ದೇಶಿಸಿದ್ದೀರಿ. ಇದು ಸಮಯೋಚಿತವಾಗಿದೆ.

ನಮ್ಮ ಸಮಾಜದಲ್ಲಿ, ನಿಶ್ಚಿತಾರ್ಥ, ಮದುವೆಯಿಂದ ಮೊದಲ್ಗೊಂಡು, ವ್ಯಕ್ತಿಯ ಮರಣದ ತನಕ ಹಲವಾರು ಕಾರ್ಯಕ್ರಮಗಳಿವೆ. ಈ ಕಾರ್ಯಕ್ರಮಗಳು ನಿಶ್ಚಿತ ನಿರ್ದೇಶನಗಳ ಕೊರತೆಯಿಂದ, ಸಮಾಜದ ಕುಟುಂಬದ ಹಿರಿಯರ ಮಾರ್ಗದರ್ಶನದ ಕೊರತೆಯಿಂದ, ತಿಳುವಳಿಕೆಯ ಕೊರತೆಯಿಂದ, ಅನ್ಯ ಸಮಾಜದ ಅನುಕರಣೆಗಳಿಂದ, ಸಮಾಜದ ಕಾರ್ಯಕ್ರಮಗಳ ವಿಧಿ-ವಿಧಾನಗಳು ದಾರಿ ತಪ್ಪಿದಂತಿವೆ. ಆದುದರಿಂದ ನಿಮ್ಮ ಈ ಪ್ರಯತ್ನವು ಸಮಾಜಕ್ಕೆ, ಸಮಾಜದ ಕಾರ್ಯಕ್ರಮಗಳಿಗೆ ದಾರಿದೀಪದಂತೆ, ಪ್ರತಿಯೊಂದು ಮನೆಯಲ್ಲಿಯು ಈ ಪುಸ್ತಕವು ಮಾರ್ಗದರ್ಶಕ ಕೃತಿಯಂತಾಗುವುದರಲ್ಲಿ ಸಂಶಯವಿಲ್ಲ.

ಶ್ರೀಯುತರೇ, ತಮ್ಮಿಂದ ಇನ್ನು ಮುಂದೆಯೂ ಈ ತರಹದ ಸಂಶೋಧನ ಕೃತಿಗಳು ಹೊರಬರಲಿ, ಅವುಗಳಿಂದ ಈಗಿರುವ ಕುಟುಂಬಗಳ ಗುರಿಕ್ಕಾರರ ಕೊರತೆಯು ನೀಗುವಂತಾಗಲಿ, ಸಮಾಜವು ಅಭ್ಯುದಯವನ್ನು ಕಾಣುವಂತಾಗಲಿ, ನೀವು ನಂಬಿರುವ ದೈವ, ದೇವರುಗಳು ನಿಮ್ಮನ್ನು ಸದಾ ಹರಸಿ, ಆಯುರಾರೋಗ್ಯ ಭಾಗ್ಯವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ವಂದನೆಗಳೊಂದಿಗೆ-

ಕೃಷ್ಣಪ್ರಸಾದ್ ರೈ

ಕೋಶಾಧಿಕಾರಿ

ಬಂಟರ ಯಾನೆ ನಾಡವರ ಮಾತೃ ಸಂಘ (ರಿ.)

ಬಂಟ್ಸ್ ಹಾಸ್ಟೆಲ್, ಮಂಗಳೂರು - 575 003