ಪುಸ್ತಕದ ಮುಖಪುಟ

ಪುಸ್ತಕದ ಮುಖಪುಟ

ಒಂದು ಮಾತು ನಾರಾಯಣ ರೈ ಕುಕ್ಕುವಳ್ಳಿ

 ಒಂದು ಮಾತು

ನಾರಾಯಣ ರೈ ಕುಕ್ಕುವಳ್ಳಿ

ನಮ್ಮ ಬಂಟ ಸಂಸ್ಕೃತಿಯೇ ಹಾಗೆ... ಎಲ್ಲ ಮಾದರಿ. ಆಚಾರ-ವಿಚಾರಗಳಿಗೆ ಅನಾದಿ ಕಾಲದಿಂದಲೂ ಬೆಲೆ ಕೊಟ್ಟವರು ನಾವು. ನಮ್ಮ ಹಿರಿಯರು ಬಾಳಿ ಬೆಳಗಿದ ಆದರ್ಶಗಳೇ ಇಂದು ನಮಗೆ ಬೆಳಕಾಗಿವೆ. ಅಂಥ ಮಹಾನ್ ಹಿರಿಯರಿಗೆ, ಅವರ ಮಾತು, ಮಾಡಿದ ಕಾರ್ಯಗಳಿಗೆ ನಾವು ಇಂದೂ ಗೌರವ ನೀಡುತ್ತಲೇ ಬರುತ್ತಿದ್ದೇವೆ. ನಮ್ಮ ಷೋಡಶ ಸಂಸ್ಕಾರಗಳು ನಮ್ಮ 'ಬಂಟತನ'ದ ಹಿರಿಮೆಯ ಕಲಶಗಳು. ಇಂದು ಆ ಕುರಿತು ಚಿಂತಿಸುವ, ಅಧಿಕಾರ ಯುತವಾಗಿ ಮಾತನಾಡುವ ಹಿರಿಯರು ನಮ್ಮ ನಡುವೆ ಇದ್ದಾರೆಂಬುದೇ ಒಂದು ಹೆಮ್ಮೆ. ಅಂಥವರಲ್ಲಿ ದಂಬೆಕ್ಕಾನ ಸದಾಶಿವ ರೈಗಳ ಹೆಸರೂ ಒಂದು. ಈಗಾಗಲೇ ಬರಹಗಾರರಾಗಿ, ಮಾತುಗಾರರಾಗಿ, ಕಾರ್ಯಕ್ರಮಗಳ ಸುಧಾರಕರಾಗಿ, ಮೇಲಾಗಿ ಸಮಾಜಪ್ರೇಮಿಗಳಾಗಿರುವ ದಂಬೆಕ್ಕಾನ ಅವರು 'ಬಂಟ ಮದಿಮೆ', 'ನಾವು ಬಂಟರು' ಎಂಬ ಎರಡು ಕೃತಿಗಳನ್ನು ನೀಡಿ ಬಂಟರ ಹಿರಿಮೆಯನ್ನು ಮೆರೆದವರು. ಅವರ 68ರ ಹರೆಯದ ಆ ಸಂದರ್ಭ 2016ರಲ್ಲಿ ಮಿತ್ರರಾಗಿರುವ ಡಾ. ರಾಜೇಶ್ ಬೆಜ್ಜಂಗಳ ಅವರು ಬರೆದಿರುವ ಕೃತಿ 'ದಂಬೆಕ್ಕಾನ ಸದಾಶಿವ ರೈ ಬದುಕಿನ ಹೆಜ್ಜೆಗಳು', ದಂಬೆಕ್ಕಾನ ಅವರ ಬದುಕಿನ ಎಳೆ ಎಳೆಗಳನ್ನು ಅನಾವರಣಗೊಳಿಸಿ ಇಂದಿನ ಯುವಕರಿಗೆ, ನಮಗೆಲ್ಲ ಒಂದು ಆದರ್ಶ, ಮಾರ್ಗದರ್ಶಿ ಕೃತಿಯಾಗಿದೆ. ಇದೀಗ ಮತ್ತೊಂದು ಹೆಜ್ಜೆ ಮುಂದೆ ಸಾಗಿದ 'ಬಂಟ ಗುರಿಕ್ಕಾರ'ನ ಕೈಪಿಡಿ ರೈಗಳು, 'ಬಂಟ ಮದುವೆ ಕಿರುಪುಸ್ತಕ ಹೊರತರುವ ಮನ ಮಾಡಿದ್ದಾರೆ.

ಬಂಟ ಮದುವೆಯ ನಿರ್ವಾಹಕ, ನಿರೂಪಕರ ಕೈಪಿಡಿ; (ಬಂಟ ಗುರಿಕ್ಕಾರನ ಗುರ್ಕಾರ್ಮೆದ ಕೈಪಿಡಿ) ಎನ್ನುವ ಕಿರುಪುಸ್ತಕದ ಹಸ್ತಪ್ರತಿಯನ್ನು ನನಗೆ ನೀಡಿ ಕಣ್ಣಾಡಿಸಲು ತಮ್ಮನ ನೆಲೆಯಲ್ಲಿ = ಹೇಳಿರುವುದು 'ಅಣ್ಣ' ನನಗೆ ನೀಡಿದ ಅವಕಾಶ ಎಂದು = ಭಾವಿಸಿದ್ದೇನೆ. ಮುತ್ತೈದೆ ಭಾಗ್ಯ: 'ಪ್ರಸ್ತಾವನೆ'; ಬಂಟ ಗುರಿಕ್ಕಾರನ | ಮಾರ್ಗಸೂಚಿ, ನಿಶ್ಚಿತಾರ್ಥ (ಬದ್ದೊ); ಮದುವೆ; ಮದುವೆ = ಮಂಟಪಕ್ಕೆ ಸಾಹಿತ್ಯ: ಧಾರಾಕಲಶ, ಕರಿಮಣಿ, ಮಂಟಪ ಆ ಇಳಿಸುವುದು; (ದೊಂಪ ಜಪ್ಪಾವುನಿ); ವಧು ಬಿಟ್ಟುಕೊಡುವುದು ಪ (ಪೊಣ್ಣು ಒಚ್ಚಿದ್ ಕೊರ್ಪುನಿ); ಬೊಂಡ.. ಇತ್ಯಾದಿ ಮಾಹಿತಿಗಳನ್ನು 5 ಅರ್ಥವತ್ತಾಗಿ ನಿರೂಪಿಸಿರುವ ಈ ಕೃತಿ ಬೆಳಕಿಗೆ ಬರಲೇಬೇಕು – 'ಮದುವೆ' ಎಂಬ ಪವಿತ್ರ ಕಾರ್ಯ ಬಾಳ ಬದುಕಿನ ಬಂಧನವಾಗಿ ನೂರುಕಾಲ ಉಳಿಯಬೇಕು.

ಬದುಕಿಗೆ ಸಂದೇಶ ನೀಡುವುದರ ಮೂಲಕ, ತನ್ನ ವ್ಯಕ್ತಿತ್ವದ ದರ್ಶನವನ್ನೇ ಮಾಡಿರುವ ದಂಬೆಕ್ಕಾನ ಸದಾಶಿವ ರೈಗಳ *ತಂದೆ ತಾಯಿಗಿಂತ ಮಿಗಿಲಾದ ದೇವರಿಲ್ಲ , *ಕಷ್ಟಕಾಲದಲ್ಲಿ ಸಹಕರಿಸುವವನೇ ನಿಜವಾದ ಮಿತ್ರ, *ಉಪಕಾರ ಮಾಡಿದವರನ್ನು ಎಂದೂ ಮರೆಯಬಾರದು, *ಆರ್ಥಿಕ ಶ್ರೀಮಂತಿಕೆ ಶಾಶ್ವತವಲ್ಲ ಹೃದಯ ಶ್ರೀಮಂತಿಕೆ ಬೆಳೆಸಿಕೋ* ಗುರುಹಿರಿಯರನ್ನು ಗೌರವಿಸು * ನಿನಗೊಂದು ಗುರಿ ಇರಲಿ, ನಿನಗೊಬ್ಬ ಗುರು ಇರಲಿ * ಸತ್ಯ-ಧರ್ಮ-ನ್ಯಾಯಕ್ಕೆ ಜಯವಾಗಲಿ- ಎಂಬಿತ್ಯಾದಿ ನುಡಿಮುತ್ತುಗಳು ನಮ್ಮ ಹೃದಯ ತುಂಬಿದಾಗ ಬದುಕಿಗೆ ಒಂದು ಅರ್ಥ ಬರುವುದು.

ದಂಬೆಕ್ಕಾನ ಸದಾಶಿವ ರೈಗಳ ಪ್ರತಿಯೊಂದು ಚಿಂತನೆ-ಕಾರ್ಯದ ಹಿಂದೆ ಅವರ ಸಹಧರ್ಮಿಣಿ ಶ್ರೀಮತಿ ಪ್ರಭಾ ಎಸ್. ರೈ: ಹಿರಿಯ ಪುತ್ರ ಅಕ್ಷಿತ್ ರೈ; ಹಿರಿಯ ಸೊಸೆ ಶ್ರೀಮತಿ ಗ್ರೀಷ್ಮಾ ಎ. ರೈ; ಕಿರಿಯ ಪುತ್ರ ಅಕ್ಷಯ ರೈ, ಕಿರಿಯ ಸೊಸೆ ಐಕ್ಯ ಎ. ರೈ ಹಾಗೂ ಮೊಮ್ಮಕ್ಕಳಾದ ಅದ್ವಿಕ್ ರೈ; ಅಯಾನ್ಸ್ ರೈ ಅವರ ಅಭಿಮಾನ ಕೊಡುಗೆಯಿದೆ. ರೈಗಳ ಆದರ್ಶವನ್ನು ಪಾಲಿಸುವುದರ ಮೂಲಕ 'ತರವಾಡಿನ' ಕೀರ್ತಿಕಲಶಗಳಾಗಿ ಬೆಳಗುತ್ತಿದ್ದಾರೆ. ಈ ಕೃತಿ ಮಾದರಿಯಾಗಿ ಮೂಡಿಬರಲಿ. ರೈಗಳು ನಂಬಿರುವ ಮರಕಡ ಶ್ರೀ ಗುರು ಪರಾಶಕ್ತಿ ಮಠದ ಸ್ವಾಮಿ ಶ್ರೀ ಶ್ರೀ ಯೋಗೇಶ್ವರೇಶ್ವರ ಸ್ವಾಮಿಯವರ ಹಾಗೂ ಸರ್ವ ದೈವ-ದೇವರ ಅನುಗ್ರಹವಿರಲೆಂದು ಹಾರೈಸುವ-

ನಾರಾಯಣ ರೈ ಕುಕ್ಕುವಳ್ಳಿ, ಎಂ.ಎ. ಬಿ.ಎಡ್. 

ಪ್ರಧಾನ ಸಂಪಾದಕ, 'ಮಧುಪ್ರಪಂಚ', ಪುತ್ತೂರು