ಬಂಟಮದುವೆ ಮುಖಪುಟ

ಬಂಟಮದುವೆ ಮುಖಪುಟ
ದಂಬೆಕ್ಕಾನ ಸದಾಶಿವ ರೈ
ಪುಸ್ತಕ ಓದಲು ಈ ಕೆಳಗಿನ ವಿಷಯಗಳಿಗೆ ಕ್ಲಿಕ್ ಮಾಡಿ

ಆಶಯ ನುಡಿ - ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ

 ಆಶಯ ನುಡಿ

 ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ 




ಬಂಟರ ಜೀವನ ಪದ್ಧತಿ ಆಚಾರ-ವಿಚಾರಗಳು ಬೇರೆ ಜಾತಿ ಯವರಿಂದ ಸ್ವಲ್ಪ ವಿಭಿನ್ನವಾಗಿರುತ್ತದೆ. ಬಂಟರಲ್ಲಿ ಅಳಿಯಕಟ್ಟು, ಹೆಣ್ಣಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ.

ಬಂಟ ವಿವಾಹದ ಆಚರಣೆಯನ್ನು ಹೇಗಿರಬೇಕೆಂದು ತಮ್ಮ ಹಿಂದಿನ ಪುಸ್ತಕದಲ್ಲಿ ಸವಿವರವಾಗಿ ಬರೆದಿರುತ್ತೀರಿ. ಅದು ನಮ್ಮ ಎಲ್ಲಾ ಬಂಟ ಬಾಂಧವರಿಗೆ ಕೈ ಕನ್ನಡಿಯಾಗಿರುತ್ತದೆ ಅಂತ ನನ್ನ ಭಾವನೆ.

ತಾವು ಮುಂದೆ ಬರೆದು ಪ್ರಕಾಶಿಸಲಿರುವ ಈ ಬಂಟ ಮದುವೆ ಪದ್ಧತಿ, ಕ್ರಮ ಆಚರಣೆ ಎಲ್ಲಾ ಬಂಟ ಜಾತಿ ಬಾಂಧವರಿಗೆ ದಾರಿದೀಪವಾಗಲಿ ಎಂದು ನಾನು ಆಶಿಸುತ್ತೇನೆ. ತನ್ನ ಜಾತಿಯ ಬಗ್ಗೆ ಸದುದ್ದೇಶವನ್ನು ಬೆಳೆಸಿಕೊಂಡಿರುವಂತಹ ತಮಗೆ, ನೀವು ನಂಬಿರುವ ದೇವರು, ದೈವಗಳ ಅನುಗ್ರಹವಿರಲಿ ಎಂದು ನಾನು ಆಶಿಸುತ್ತೇನೆ.


ಎ. ಲಕ್ಷ್ಮೀನಾರಾಯಣ ಶೆಟ್ಟಿ

ತಿಂಗಳಾಡಿ ಮನೆ

ಮಾಜಿ ಅಧ್ಯಕ್ಷರು, ಪುತ್ತೂರು ತಾಲೂಕು ಬಂಟರ ಸಂಘ

(02-09-2017ರಿಂದ 11-01-2020)