ಪುಸ್ತಕದ ಮುಖಪುಟ

ಪುಸ್ತಕದ ಮುಖಪುಟ

ಧಾರಾಕಲಶ

 ಧಾರಾಕಲಶ

ಧಾರಾಕಲಶದಲ್ಲಿ - ಐದು ತೆಂಗಿನ ಹಿಂಗಾರದ ಎಸಳು 

ಐದು ಮಾವಿನ ಎಲೆಗಳು 

ಐದು ಹಲಸಿನ ಎಲೆಗಳು

ಗಂಗಾಜಲ ತುಂಬಿಸಿ, ಒಂದು ನಾಣ್ಯ ಹಾಕಿ, ಅದರ ಮೇಲಿಂದ ಒಂದು ಮುಗುಡದ ತೆಂಗಿನ ಕ್ಯಾ, ಅದರ ಮೇಲೆ ತುದಿಯಲ್ಲಿ ಮಲ್ಲಿಗೆ ಹೂವು ಇಡಬೇಕು.

ಮುಂದಿನ ನಡೆ, ಧಾರಾಕಲಶವನ್ನು ವಧುವಿನ ಮಾವನ ಕೈಯಲ್ಲಿ ಕೊಟ್ಟು, ಸಭಾಂಗಣದಲ್ಲಿ ಸೇರಿದ ಎಲ್ಲಾ ಬಂಧು-ಮಿತ್ರರ ಒಪ್ಪಿಗೆಯನ್ನು ಪಡೆಯಲೋಸುಗ ಸಭೆಗೆ ಹೋಗಿ ಬರುವುದು. ಅವರ ಜೊತೆಯಲ್ಲಿ ಹೆಣ್ಣಿನ ತಂದೆ ತಾಯಿ ಹೋಗಬಹುದು.

ವೇದಿಕೆಯಲ್ಲಿ ಬಂಟ ಗುರಿಕ್ಕಾರನು ವಧು-ವರರ ಕೈಯಲ್ಲಿದ್ದ ತಾಂಬೂಲವನ್ನು ಕೆಳಗಿಳಿಸಿ, ವಧುವಿನ ಕೈಯಲ್ಲಿರುವ ಒಡ್ಡಿ ಉಂಗಿಲವನ್ನು ತೆಗೆಸಿ, ಐದು ವೀಳ್ಯದೆಲೆ, ಒಂದು ಅಡಿಕೆ, ಒಡ್ಡಿ ಉಂಗಿಲ ಸಹಿತ- ವರನ ಎಡಗೈ ಮೇಲೆ ವಧುವಿನ ಎಡಗೈ ಅದರ ಮೇಲೆ ವರನ ಬಲಗೈ ಅದರ ಮೇಲೆ ವಧುವಿನ ಬಲಗ್ಗೆ, ಅದರ ಮೇಲೆ ಬಂಟ ಗುರಿಕ್ಕಾರನ ಕೈಯಲ್ಲಿರುವ ವೀಳ್ಳದರೆ ಅಡಿಕೆ, ಒಡ್ಡಿಂಗಿಲವನ್ನು ಅವರ ಕೈಯ ಮೇಲಿಟ್ಟು ಅದರ ಮೇಲೆ ಧಾರಾಕಲಶ ಇಡಬೇಕು.

ತಕ್ಷಣ ವೇದಿಕೆ ಮೇಲಿರುವ ಎಲ್ಲಾ ಹಿರಿಯರಿಗೆ ಅಕ್ಷತೆ ಕಾಳು ಕೊಡಬೇಕು. ಒಂದು ಹರಿವಾಣವನ್ನು ಧಾರಾಕಲಶದ ಕೈಗಳ ಅಡಿಯಲ್ಲಿ ಕೈಹಿಡಿದ ಬಾವನಿಂದ ಹಿಡಿಸುವುದು.

ಎಲ್ಲ ಹಿರಿಯರು ಗಂಡು ಹೆಣ್ಣನ್ನು ಮುಟ್ಟಿಕೊಂಡಿರಬೇಕು. ಆಗ ಬಂಟ ಗುರಿಕ್ಕಾರನು ಭಾರತೀಯ ಸಂಸ್ಕೃತಿಯ ಪಂಚನದಿ ಗಳನ್ನು ಸಂಕಲ್ಪಿಸಿ, ಪ್ರಾರ್ಥಿಸಿ ಆ ನದಿಗಳ ನೀರು ಈ ಕಲಶದಲ್ಲಿ ತುಂಬಿದೆ ಎಂಬ ಪ್ರಾರ್ಥನೆಯೊಂದಿಗೆ ವಧು-ವರರನ್ನು ಮೂರು ಬಾರಿ ಧಾರಾಕಲಶ ಸಮೇತ ಕುಳಿತುಕೊಳ್ಳಿಸಿ ಎಬ್ಬಿಸುವುದು.

ಹಾಗೆ ಕುಳಿತು ಮೇಲೇರುವಾಗ ಕಲಶದಿಂದ ನೀರು ಅಡಿಕೆ, ಉಂಗುರ, ವೀಳ್ಯದೆಲೆಗಳ ಮೇಲೆ ಧಾರೆಯಾಗಿ ಬೀಳುತ್ತಿರಬೇಕು. ಕೆಳಗೆ ಹೋಗುವಾಗ ಬೀಳಬಾರದು. ಏಳುವಾಗ ಮಾತ್ರ ನೀರು ಬೀಳತಕ್ಕದ್ದು.

ಕುಳಿತು ಏಳುತ್ತಿರುವಾಗ ಬಾವನ ಕೈಯಲ್ಲಿದ್ದ ಹರಿವಾಣ ಕೈಗಳ ಜೊತೆಯಲ್ಲಿಯೇ ಮೇಲೆ ಕೆಳಗೆ ಹೋಗತಕ್ಕದ್ದು.

ಮೂರು ಬಾರಿ ಕುಳಿತು ಎದ್ದಾದ ಮೇಲೆ ಧಾರಾಕಲಶವನ್ನು ತೆಗೆದು ತಾಂಬೂಲ ಮತ್ತು ಉಂಗುರವನ್ನು ಹರಿವಾಣಕ್ಕೆ ಬಿಡಬೇಕು. ಬಂಟ ಗುರಿಕ್ಕಾರನು ಆ ಉಂಗುರವನ್ನು ತೆಗೆದು ವರನ ಕೈಯಲ್ಲಿ ಕೊಡುವುದು. ವರನು ಆ ಉಂಗುರವನ್ನು ವಧುವಿನ ಒಡ್ಡಿ ಉಂಗಿಲದ ಬೆರಳಿಗೆ ತೊಡಿಸಬೇಕು.

ಆಗ ಎಲ್ಲಾ ಹಿರಿಯರು ಕೈಯಲ್ಲಿದ್ದ ಅಕ್ಷತೆಗಳನ್ನು ವಧು-ವರರ ಮೇಲೆ ಹಾಕುವುದು.