ಪುಸ್ತಕದ ಮುಖಪುಟ

ಪುಸ್ತಕದ ಮುಖಪುಟ

ಒಳ್ನುಡಿ - ಕೆ. ಸೀತಾರಾಮ ರೈ ಸವಣೂರು

 ಒಳ್ನುಡಿ

ಕೆ. ಸೀತಾರಾಮ ರೈ ಸವಣೂರು

ದಂಬೆಕ್ಕಾನ ಸದಾಶಿವ ರೈಯವರ ಹೆಸರೇ ಒಂದು ಸದಾಶಯದ ಹೆಸರು. ನಾಡು-ನುಡಿ-ಸಂಸ್ಕೃತಿಗೆ ಬಹಳ ಗೌರವ ಕೊಡುವ ರೈಯವರ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕೆಲ: ಕಾರ್ಯಗಳು ಸಮಾಜಮುಖಿಯಾಗಿವೆ. ಪ್ರತಿಯೊಂದನ್ನೂ ಚಿಕಿತ್ಸ ಮನೋಭಾವದಿಂದ ನೋಡುವ ದಂಬೆಕ್ಕಾನ ಅವರು ನಮ್ಮ ಬಂಟ ಒ ಸಮಾಜಕ್ಕೊಂದು ಹಿರಿಮೆ.

ಈಗಾಗಲೇ ಅವರ “ಬದುಕಿನ ಹೆಜ್ಜೆಗಳು" ಹೇಗೆ ಸಾಗಿದವು ಒ ಅವರ ಒಟ್ಟು ಸಮಾಜ ಪ್ರೀತಿ, ಕ್ರಿಯಾಶೀಲತೆ ಹೇಗಿದೆ ಎಂಬುದನ್ನು ಬಹಳ ಹತ್ತಿರದಿಂದ ಕಂಡವರಲ್ಲಿ ನಾನೂ ಒಬ್ಬನು. ಅವರ ಮಾತು-ಕೃತಿ ಒಂದಕ್ಕೊಂದು ಪೂರಕ. ತನ್ನ ಪ್ರೌಢ ಬರಹಗಳೊಂದಿಗೆ ತುಳುನಾಡಿನ ಮನ-ಮನದಲ್ಲಿ ಗೌರವಿಸಲ್ಪಡುವ ದಂಬೆಕ್ಕಾನ ಸದಾಶಿವ ರೈಯವರು ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ ಅನುಭವಿಗಳು, ಚಿಂತಕರು.  

ಬಂಟರ ಮದಿಮೆ: ನಾವು ಬಂಟರು ತುಳು-ಕನ್ನಡ ಕೃತಿಗಳನ್ನು ಲೋಕಾರ್ಪಣೆ ಮಾಡಿರುವ ದಂಬೆಕ್ಕಾನ ಸದಾಶಿವ ರೈಗಳ "ಬದುಕಿನ ಹೆಜ್ಜೆಗಳು", ಅವರು ನಡೆದು ಬಂದ ಹಾದಿಯ ಸಿಂಹಾವಲೋಕನ ಮಾಡಿದ ಅನುಕರಣೀಯ ಕೃತಿ. ತುಳು ನಾಡೆಂದರೆ ಹಾಗೇನೇ. ತುಳು ನಾಡು-ನುಡಿ-ಸಂಸ್ಕೃತಿ-ಆಚಾರ-ವಿಚಾರಗಳು ಇಂದು ಮೇಲ್ಪಂಕ್ತಿಯಲ್ಲಿದ್ದು ತಾಯಿಬೇರೆನಿಸಿ ಕೊಂಡಿವೆ. ಅದರಲ್ಲೂ 'ಬಂಟರ ಮದಿಮೆ' ಇತರ ಸಂಸ್ಕಾರ ಕಾರ್ಯಗಳು ಎಲ್ಲಾ ಜನಾಂಗಗಳವರ ಗಮನ ಸೆಳೆದು ಅನುಕರಣೀಯವಾಗಿದೆ. ನಮ್ಮ ಸಂಪ್ರದಾಯದ ಆಳ-ವಿಸ್ತಾರ ಅರಿತಿರುವ ರೈಗಳು ಅತ್ಯುತ್ತಮ ಮಾತುಗಾರರು. ವಿಚಾರಪೂರಿತ ಅವರ ಮಾತುಗಳಲ್ಲಿ ನಮ್ಮ ಬದುಕಿನ ಆದರ್ಶಗಳು ಅಡಗಿವೆ.

"ಮಾತೃಪ್ರಧಾನ" ಕುಟುಂಬ ವ್ಯವಸ್ಥೆ ಹೊಂದಿರುವ ನಮ್ಮ ಬಂಟ ಸಮಾಜ ಕುಟುಂಬ ವ್ಯವಸ್ಥೆಯನ್ನು ಸತ್ವಭರಿತವಾಗಿ, ಗುಣ ವಿಶೇಷತೆಗಳನ್ನು ಒಳಗೊಂಡಿರುವಂತೆ ರೂಪಿಸಬೇಕಾದರೆ ದಂಬೆಕ್ಕಾನ ಸದಾಶಿವ ರೈಯವರಂಥ ಸಹೃದಯಿ ಬಾಂಧವರು ಒಟ್ಟುಗೂಡಬೇಕಾಗಿದೆ. ಅವರ ಈ ಕಾರ್ಯದಲ್ಲಿ ನಮ್ಮ ಪೂರ್ಣ ಸಹಕಾರವಿದೆ. ಅವರು ಬರೆದಿರುವ ಕೃತಿ ಸಮಾಜ ಪ್ರೀತಿ ಗಳಿಸಲಿ, ಇನ್ನೂ ಹೆಚ್ಚಿನ ಕೃತಿಗಳನ್ನು ಸಮಾಜಕ್ಕೆ ನೀಡಲಿ ಎಂದು ಈ ಒಳ್ಳುಡಿಯ ಮೂಲಕ ಹಾರೈಸುವೆ.

- ಕೆ. ಸೀತಾರಾಮ ರೈ ಸವಣೂರು