ಬಂಟಮದುವೆ ಮುಖಪುಟ

ಬಂಟಮದುವೆ ಮುಖಪುಟ
ದಂಬೆಕ್ಕಾನ ಸದಾಶಿವ ರೈ
ಪುಸ್ತಕ ಓದಲು ಈ ಕೆಳಗಿನ ವಿಷಯಗಳಿಗೆ ಕ್ಲಿಕ್ ಮಾಡಿ

ಸಂದೇಶ - ಸಂಜೀವ ಶೆಟ್ಟಿ ಸಂಪಿಗೇಡಿ

 ಸಂದೇಶ

ಸಂಜೀವ ಶೆಟ್ಟಿ ಸಂಪಿಗೇಡಿ




ಬಂಟ ಸಮಾಜದ ಮದುವೆಯ ವಿಧಿವಿಧಾನಗಳನ್ನು ವ್ಯವಸ್ಥಿತ ರೀತಿ ಯಲ್ಲಿ ನಿರ್ವಹಿಸುವ ಬಗ್ಗೆ 'ಬಂಟ ಮದುವೆ ಹಾಗೂ ಬಂಟ ಗುರಿಕ್ಕಾರ' ಎಂಬ ಒಂದು ಕೈಪಿಡಿಯನ್ನು ತಾವು ಪ್ರಕಟಿಸುವ ಚಿಂತನೆಯನ್ನು ಮಾಡಿರುವುದು ಅತ್ಯುತ್ತಮ ಚಿಂತನೆಯಾಗಿದೆ.

ಬಂಟ ಸಮಾಜದ ಶುಭ ಕಾರ್ಯಕ್ರಮಗಳು ನಮ್ಮ ಹಿರಿಯರು ನಡೆಸಿಕೊಂಡು ಬಂದ ಕಟ್ಟುಕಟ್ಟಲೆಯಂತೆ ಕ್ರಮಬದ್ಧವಾಗಿ ನಡೆಯಲು ತಾವು ಪ್ರಕಟಿಸುತ್ತಿರುವ ಈ ಕೈಪಿಡಿಯು ಸಮಾಜಕ್ಕೆ ಒಂದು ಮಾರ್ಗದರ್ಶಿ ಕೃತಿಯಾಗಿ ಮೂಡಿಬರಲಿ.

ಈ ಕೃತಿಯೂ ಸುಂದರವಾಗಿ ಪ್ರಕಟಗೊಂಡು ಸಮಾಜ ಬಾಂಧವರಿಗೆ ದೊರಕಲಿ ಹಾಗೂ ಮುಂದೆಯೂ ಸಮಾಜಕ್ಕೆ ಉತ್ತಮ ಕೃತಿಗಳನ್ನು ನೀಡಲು ದೇವರು ತಮಗೆ ಆಯುರಾರೋಗ್ಯ ಭಾಗ್ಯವನ್ನು ನೀಡಲೆಂದು ಪ್ರಾರ್ಥಿಸುತ್ತೇನೆ.

ವಂದನೆಗಳೊಂದಿಗೆ,

                                                                                                                                   ಸಂಜೀವ ಶೆಟ್ಟಿ ಸಂಪಿಗೇಡಿ

ಜೊತೆ ಕಾರ್ಯದರ್ಶಿ

ಬಂಟರ ಯಾನೆ ನಾಡವರ ಮಾತೃ ಸಂಘ (ರಿ.), ಮಂಗಳೂರು

11-11-2021