ಪುಸ್ತಕದ ಮುಖಪುಟ

ಪುಸ್ತಕದ ಮುಖಪುಟ

ಬೊಂಡ

 ಬೊಂಡ

ಹಿಂದಿನ ಕಾಲದಲ್ಲಿ ಮದುವೆಯಾದ ಹೆಣ್ಣನ್ನು ವರನ ಮನೆಗೆ ಕರೆದುಕೊಂಡು ಬಂದು ಆರತಿ ಬೆಳಗಿ ಮನೆಯೊಳಗೆ ಕರೆಸಿ ಕೊಳ್ಳುವುದು. ಅವರಿಬ್ಬರೂ ದೇವರಕೋಣೆಯಲ್ಲಿ ಪ್ರಾರ್ಥಿಸಿ ನಮಸ್ಕರಿಸುವುದು. ಆಮೇಲೆ ಇಬ್ಬರಿಗೂ ಒಟ್ಟಿಗೆ ಕೂರಿಸಿ ಹಾಲು ನೀಡುವುದು. ಅದು ವರನ ತಾಯಿಯಿಂದ ನಿರ್ವಹಣೆಯಾಗುತ್ತದೆ.

ರಾತ್ರಿ ಊಟದ ಸಮಯದಲ್ಲಿ ಕೊಡಿ ಬಾಳೆ ಎಲೆ ಹಾಕಿ ವರನಿಗೆ ವಧುವಿನ ಕೈಯಲ್ಲಿ ವರನ ತಾಯಿ ಊಟ ಬಡಿಸಲು ಹೇಳಬೇಕು. ಊಟವಾದ ಮೇಲೆ ಅದೇ ಎಲೆಯಲ್ಲಿ ವರನ ತಾಯಿ ವಧುವಿಗೆ ಊಟ ಬಡಿಸಬೇಕು. ಆಗ ಅತ್ತೆ ಸೊಸೆಗೆ ಬಹುಮಾನ ಕೊಡುವ ಪದ್ಧತಿಯಿದೆ. ಸಟ್ಟುಗದ ಪಣವು. ಆಮೇಲೆ ಅವಳು ಅದೇ ಎಲೆಯಲ್ಲಿ ಊಟ ಮಾಡುವುದು.

ಆದರೆ ಈಗೀಗ ಅದು ಬೊಂಡ ಕುಡಿಸುವುದರಲ್ಲಿಯೇ ಮುಕ್ತಾಯವಾಗುತ್ತದೆ. ಮದುವೆ ಮಂಟಪದ ಕೆಳಗಿನ ಚಾವಡಿಯಲ್ಲಿ ವರನ ತಾಯಿ ಬೊಂಡವನ್ನು ವಧುವಿನ ಕೈಗೆ ನೀಡಬೇಕು. ಮದುಮಗನು ಪಡುಮುಖವಾಗಿ ಕುಳಿತಿರಬೇಕು. ಮದುಮಗಳು ಬೊಂಡವನ್ನು ಮದುಮಗನ ಕೈಗೆ ಕುಳಿತಲ್ಲಿಗೆ ಕೊಡುವುದು. ಆ ಬೊಂಡವನ್ನು ಆತ ಅರ್ಧ ಕುಡಿದು ಅವಳ ಕೈಗೆ ಕೊಟ್ಟು ಆಕೆ ಕುಡಿಯುವುದು. ಆಗ ಅತ್ತೆ ಅವಳಿಗೆ ಬಹುಮಾನ ಕೊಡುವುದು ಇದೆ. ಅದುವೇ ಸಟ್ಟುಗದ ಪಣವು. ಅಂದರೆ, ಈ ಕ್ಷಣದಿಂದ ವರನ ತಾಯಿಯ ಸ್ಥಾನವನ್ನು ವಧು ವಹಿಸಿಕೊಂಡಿದ್ದಾಳೆ. ಎನ್ನುವಂತಹ ಭಾವಾರ್ಥದಲ್ಲಿ ಈ ಕಾರ್ಯ ನಡೆಯುತ್ತದೆ. ಇದು ಸತ್ಯ.

ಮದುವೆಯೆಂದರೆ, ಒಂದು ಗಂಡು ಮತ್ತು ಒಂದು ಹೆಣ್ಣಿನ ಬಾಳಿನ ಸಂಗಾತಿಯಾಗುವುದೊಂದೇ ಅಲ್ಲ. ಮದುವೆಯೆಂಬುದು ಒಂದು ಪವಿತ್ರ ಧರ್ಮಕಾರ್ಯ. ಜೀವನದ ಕೊನೆಯ ಘಳಿಗೆಯ ವರೆಗೂ ಮರೆಯಲಾರದ ಹಾಗೂ ಮರೆಯಬಾರದ ಒಂದು ದಿವ್ಯ ಅನುಬಂಧ! ಈ ಮಧುರ ಬಾಂಧವ್ಯದ ಅರ್ಥವನ್ನು ಹೇಳುವುದಾದರೂ ಹೇಗೆ? ಯಾರಿಗೆ ಸಾಧ್ಯ? ಶಬ್ದ-ಮಾತುಗಳಿಗೆ ನಿಲುಕದ ಋಣಾನುಬಂಧ!!!

ವಿವಾಹ ಎಂಬುದೊಂದು 'ಧರ್ಮಾವಿಷ್ಕಾರಣ'! ಮಾತಾ ಪಿತೃಗಳು ಹಣ ಲಕ್ಷಾಂತರ ಖರ್ಚು ಮಾಡುವುದೇ ಮುಖ್ಯವಲ್ಲ. ಮಕ್ಕಳಿಗೆ ಮದುವೆಯ ಬಗ್ಗೆ ತಿಳಿವಳಿಕೆ ಕೊಡುವುದು ಬಹಳ ಮುಖ್ಯವಾಗಿರುತ್ತದೆ. ಇಂದಿನ ದಿನಮಾನಸಗಳಲ್ಲಿ ಇದು ಬಹಳ ಮುಖ್ಯವೆನಿಸುತ್ತದೆ.

ಎಲ್ಲರಿಗೂ ಶುಭವಾಗಲಿ.

ಸತ್ಯ - ನ್ಯಾಯ - ಧರ್ಮಕ್ಕೆ ಜಯವಾಗಲಿ.